ಬೆಂಗಳೂರು : ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪಾಲನಹಳ್ಳಿ ಮಠದ ಸ್ವಾಮೀಜಿ ಬೆಳ್ಳಿ ಕಿರೀಟ ಹಾಕಿದ್ದಾರೆ.
ಮಾಗಡಿ ತಾಲೂಕು ಸೋಲೂರಿನ ಶ್ರೀ ಶನೈಶ್ವರ ಕ್ಷೇತ್ರ ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿಗಳು ಡಿಕೆಶಿಗೆ ಕಿರೀಟ ಹಾಕಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಡಿಕೆಶಿ ಭೇಟಿ ಮಾಡಿ ಸ್ವಾಮೀಜಿ ಅಭಿನಂದನೆ ಸಲ್ಲಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಐದು ವರ್ಷ ಪೂರೈಸುತ್ತಿರುವ ಡಿಸಿಎಂ ಡಿಕೆಶಿಗೆ ಶಾಲು ಹೊದಿಸಿ ಹೂವಿನ ಹಾರ ಮತ್ತು ಕಿರೀಟ ತೊಡಿಸಿ ಅಭಿನಂದಿಸಿದ್ದಾರೆ.