ಬೆಂಗಳೂರು : ಡಿ.ಕೆ.ಶಿವಕುಮಾರ್ ಸಿಎಂ ಆಗೋದನ್ನು ಯಾರೂ ತಪ್ಪಿಸಲು ಆಗಲ್ಲ ಎಂದು ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅನಾವಶ್ಯಕವಾಗಿ ಸಿಎಂ ಹಬ್ಬಿಸುತ್ತಿರುವ ಗೋಜಲು ಇದು. ಕಾಂಗ್ರೆಸ್ ಪಕ್ಷದ ನೇಮ್ ಅಂಡ್ ಫೇಮ್ ಹಾಳು ಮಾಡುತ್ತಿದ್ದಾರೆ. ಇವರೇನು ಕಾಂಗ್ರೆಸ್ ಕಟ್ಟಿದವರಲ್ಲವಲ್ಲ, ಅವರಿಗೇನು ಆಗಬೇಕು. ಅವರದ್ದು ಮುಗಿಯಿತಲ್ಲ. ಇದು ಅನಾವಶ್ಯಕವಾಗಿದೆ.
ಮಂತ್ರಿಗಳನ್ನು ಯಾರು ಕೇಳ್ತಾರೆ? ಸುಮ್ನೆ ಇವರುಗಳೇ ಐದು ವರ್ಷ ಅವರೇ ಎನ್ನುತ್ತಾರೆ. 136 ಸ್ಥಾನ ಬರಲು ಡಿ.ಕೆ.ಶಿವಕುಮಾರ್ ಕೊಡುಗೆ ಇದೆ. ಎಲ್ಲಾದಕ್ಕೂ ಡಿಕೆಶಿಯವರದ್ದು ಖರ್ಚಾಗಿಲ್ವಾ? ಎಲೆಕ್ಷನ್ ಸಂದರ್ಭದಲ್ಲೇ ಆಗಿರುವ ಮಾತುಕತೆ ಇದು. ಡಿ.ಕೆ.ಶಿವಕುಮಾರ್ ಸಿಎಂ ಆಗೋದನ್ನು ಯಾರೂ ತಪ್ಪಿಸಲು ಆಗಲ್ಲ ಎಂದರು.
ಮುಡಾ ಆಸ್ತಿ ಇ.ಡಿ ಮುಟ್ಟುಗೋಲಿನ ಬಗ್ಗೆ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಹೌದೌದು ಅವರದ್ದು ಸಿಕ್ಕರೆ ರಾಜಕೀಯ ಪ್ರೇರಿತ. ಸಿಎಂ ಮುಡಾ ಕೇಸ್ನಲ್ಲಿ ಮರ್ಯಾದೆ ಕಳೆದುಕೊಂಡಿದ್ದಾರೆ. ಮೈಸೂರು ಜನ ಮನೆ ಕಟ್ಟಲು ಒಂದು ಸೈಟ್ ಕೊಡಪ್ಪ ಅಂದರೆ ಅವರ ಮನೆಯವರೇ ಬರೆಸಿಕೊಳ್ಳೋದಾ?, ಸಿದ್ದರಾಮಯ್ಯ ಕಾಲದಲ್ಲಿ ಮೈಸೂರು ವಿಜಯನಗರ ಸಾಮ್ರಾಜ್ಯ ಆಗಿದೆ. 1,200 ರೂ.ಗೆ 50*80 ಒಂದು ಸೈಟು ಯಾರ ಕಾಲದಲ್ಲಿ ಇತ್ತು? ವಿಜಯನಗರ ಸಾಮ್ರಾಜ್ಯದಲ್ಲಿ ಚಿನ್ನಬೆಳ್ಳಿ ಮಾರಿದಂತೆ ಸೈಟು ಮಾರಿದ್ದಾರೆ. ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.