ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಇಂದು ಪಕ್ಷ ಸಂಘಟನೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರುವ ಅವರು ಕ್ಷೇತ್ರ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜನರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಬಗೆಹರಿಸಿದವರಿಗೆ ಸಂಪುಟ ಪುನಾರಚನೆ ಸಮಯದಲ್ಲಿ ಆದ್ಯತೆ ನೀಡಲಾಗುವುದು.
ಮಂತ್ರಿಯಾಗಿದ್ದರೂ ವ್ಯರ್ಥ ಕಾಲಹರಣ ಮಾಡಿರುವವರಿಗೆ ಪ್ರಾಶಸ್ತ್ಯ ನೀಡೋದು ಬೇಡ ಅಂತ ಹೈಕಮಾಂಡ್ನಿಂದ ಸೂಚನೆ ಬಂದಿದೆ ಎಂದು ಶಿವಕುಮಾರ್ ಹೇಳಿದರು. ಮಹಿಳಾ ಮೀಸಲಾತಿ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕಿದೆ ಒಟ್ಟಿನಲ್ಲಿ ರಿಸಲ್ಟ್ ಓರಿಯೆಂಟೆಡ್ ಮುಖಂಡರಿಗೆ ಮಣೆ ಹಾಕಲಾಗುವುದು ಎಂದು ಶಿವಕುಮಾರ್ ಹೇಳಿದರು.